ಹೈದರಾಬಾದ್: ಏಕೀಕರಣ?

ಏಳನೆಯ ನಿಜಾಮನ ಇಷ್ಟಕ್ಕೆ ವಿರುದ್ಧವಾಗಿ, ಜನರ ಅಭಿಪ್ರಾಯಗಳನ್ನು ಸಂಗ್ರಹಿಸದೇ ಹೈದರಾಬಾದ್ ಪ್ರಾಂತವನ್ನು ಭಾರತದ ಸಂವಿಧಾನದಡಿ ತಂದುದರ ಬಗ್ಗೆ ಸಾಕಷ್ಟು ಬರೆಯಲ್ಪಟ್ಟಿದೆ. ಈ ಬಗ್ಗೆ ಇರುವ ರಾಷ್ಟ್ರವಾದೀ ಅಭಿಪ್ರಾಯವೂ ಎಲ್ಲರಿಗೂ ವಿದಿತವಾದದ್ದೇ - ನಿಜಾಮ ಮೀರ್ ಉಸ್ಮಾನ್ ಅಲಿಯ ನಿಲುವಿನಲ್ಲಿ ಹುರುಳಿರಲಿಲ್ಲ; ಭಾರತದ ನಡುಮಧ್ಯದಲ್ಲಿದ್ದ ಹೈದರಾಬಾದಿಗಿದ್ದ ಭೌಗೋಳಿಕ ಮಹತ್ವವನ್ನು ಗಮನಿಸಿದಾಗ ಆ ಪ್ರಾಂತವನ್ನು ಪಾಕಿಸ್ತಾನದ ಅಂಗವನ್ನಾಗಿ ಮಾಡುವ ಯೋಚನೆಯನ್ನು ಮಾಡುವುದಾಗಲೀ, ಹೈದರಾಬಾದನ್ನು ಸ್ವತಂತ್ರ ರಾಜ್ಯವಾಗಿ ಬಿಟ್ಟುಕೊಡುವುದಾಗಲೀ ಅಸಾಧ್ಯದ ಮಾತೇ ಆಗಿತ್ತು. ಹೀಗಾಗಿ ಪೋಲೀಸ್ ಕಾರ್ಯಾಚರಣೆ ಹಾಗೂ ಹೈದರಾಬಾದನ್ನು ಭಾರತದ ಸೇರಿಸುವ ಪ್ರಕ್ರಿಯೆಯಲ್ಲಿ ಉಕ್ಕಿನ ಮಾನವ ಸರದಾರ್ ಪಟೇಲರ ಸಾಧನೆಗಳಲ್ಲಿ ಮಹತ್ವದ್ದೆಂದು ಗುರುತಿಸುವುದು ಸಹಜವೂ ಆಗಿದೆ.

1 ಟಿಪ್ಪಣಿಗಳು:

manju said...

ಶ್ರೀರಾಮ್,
ನಾನು ಹೈದರಾಬಾದ್ ಒಡೆದು, 3 ಭಾಗಮಾಡಿ ಹಂಚಿದ್ದರಿಂದ ಆಯಾ ರಾಜ್ಯಕ್ಕೆ ಸೆರಿದ ಭಾಗಗಳು ಹಿಂದುಳಿದವು ಎಂಬ ಈ ವಾದವನ್ನು ಒಪ್ಪುತ್ತೆನೆ. ಹೈದರಾಬಾದ್ ಬಿಟ್ಟು ಕರ್ನಾಟಕಕ್ಕೆ ಬಂದದ್ದರಿಂದ ನಮಗೆ ಹಾನಿಯೆ ಹೆಚ್ಚಾಯಿತು.ಇಲ್ಲದಿದ್ದರೆ ರಾಜಧಾನಿಗೆ ಹತ್ತಿರವಾಗಿ ಇರುತ್ತಿದ್ದೆವು. ಮೈಸೂರು ಮತ್ತ ಮುಂಬೈ ಕರ್ನಾಟಕದವರಿಂದ ತಿರಸ್ಕಾರಕ್ಕೆ ಒಳಗಾಗಿ ಒಂದು ರೀತಿ ಬಹಿಷ್ಕೃತರಂತೆ ಇರುತ್ತಿರಲಿಲ್ಲ.
ತಮಗೆ ಹೈದರಾಬಾದಿನ ಇತಿಹಾಸ(1800-1956) ಬಗ್ಗೆ ಯಾವುದಾದರು ಉತ್ತಮ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ.