ಯಂತ್ರ-ಮಾನವ ದ್ವಂದ್ವ!
| Reactions: |
ನಾ ಹೇಗೆ ಬಡವನು ನಾ ಹೇಗೆ ಪರದೇಶಿ..
© ಎಂ.ಎಸ್.ಶ್ರೀರಾಮ್ |
| Reactions: |
ವಲಸೆ ಕಾರ್ಮಿಕರ ಹಣಪಾವತಿಯ ತಂತ್ರಜ್ಞಾನ
© ಎಂ.ಎಸ್.ಶ್ರೀರಾಮ್ |
| Reactions: |
ಗೋದಾವರಿಯ ಅಕ್ಷರಸ್ಥರೂ, ಧರ್ಮಪುರಿಯ ವಿದ್ಯಾವಂತರೂ..
© ಎಂ.ಎಸ್.ಶ್ರೀರಾಮ್ |
| Reactions: |
ಎರಡು ವರ್ಷಗಳ ನಂತರ... ಮುಚ್ಚಿದ ಪ್ರೀಮಿಯರ್
| Reactions: |
ಸೊರಗಿದ ಪ್ರೀಮಿಯರ್....
ಮುಂದೆ..............
© ಎಂ.ಎಸ್.ಶ್ರೀರಾಮ್ |
| Reactions: |
ಗುರುಪ್ರಸಾದ್ ಕಾಗಿನೆಲೆ - ಈ ವರೆಗೆ
© ಎಂ.ಎಸ್.ಶ್ರೀರಾಮ್ |
| Reactions: |
ಚಿಕ್ಕಸಾಲಕ್ಕೆ ವಲಸೆಬಂದ ವಿಕಾಸವಾದಿಗಳು
© ಎಂ.ಎಸ್.ಶ್ರೀರಾಮ್ |
| Reactions: |
ಬುದ್ಧಿವಂತಿಕೆಯ ಗೆರೆ
© ಎಂ.ಎಸ್.ಶ್ರೀರಾಮ್ |
| Reactions: |
ವೈಟ್ ಹೊಟೇಲ್: ಕೋಣೆಗೊಬ್ಬ ಕಲಾವಿದ - ಕಲಾವಿದನಿಗೊಂದು ಕೋಣೆ.
© ಎಂ.ಎಸ್.ಶ್ರೀರಾಮ್ |
| Reactions: |
ಹೃದ್ರೋಗಿಗಳು ಕಡಿಮೆಯಾಗುತ್ತಾರೆ
© ಎಂ.ಎಸ್.ಶ್ರೀರಾಮ್ |
| Reactions: |
ರಾಮಲಿಂಗ ರಾಜು ಎನ್ನುವ ಎನ್ ಮೈನಸ್ ವನ್ ಹೀರೋ
© ಎಂ.ಎಸ್.ಶ್ರೀರಾಮ್ |
| Reactions: |
ಶುಷ್ಕ ವಕ್ರ ಈ ನಗೆ
© ಎಂ.ಎಸ್.ಶ್ರೀರಾಮ್ |
| Reactions: |
ಮಕ್ಕಳಿಸ್ಕೂಲು ಮನೇಲಲ್ಲ
© ಎಂ.ಎಸ್.ಶ್ರೀರಾಮ್ |
| Reactions: |
ಸ್ಲಂಡಾಗ್/ವೈಟ್ ಟೈಗರ್: ಸಂಭ್ರಮದ ನಡುವೆ ನೈತಿಕ ನಿಲುವಿನ ಕೆಲವು ಪ್ರಶ್ನೆಗಳು.
© ಎಂ.ಎಸ್.ಶ್ರೀರಾಮ್ |
| Reactions: |
ಸತ್ಯಂ ತಲ್ಲಣಗಳು
© ಎಂ.ಎಸ್.ಶ್ರೀರಾಮ್ |
| Reactions: |
ರಾಮ್ ಗುಹಾ ಬರೆದ ಕ್ರಿಕೆಟ್ ರಾಜ್ಯ
© ಎಂ.ಎಸ್.ಶ್ರೀರಾಮ್ |
| Reactions: |
ಅಹಮದಾಬಾದಿನಲ್ಲಿ ನಡೆ-ನುಡಿ
© ಎಂ.ಎಸ್.ಶ್ರೀರಾಮ್ |
| Reactions: |
ಆತಂಕವಾದದ ಕಾಲದಲ್ಲಿ ಐಶಾರಾಮದ ಆತಂಕ
ಈ ಹಿಂದೆ ನಾನು ತಾಜ್ ಬಗ್ಗೆ ಬರೆದಾಗಲೂ ಇಂಥದೊಂದು ಪ್ರತಿಕ್ರಿಯೆ ಬರಬಹುದು ಅನ್ನುವ ಅನುಮಾನವಿತ್ತು. ಸಾಮಾಜಿಕ/ಆರ್ಥಿಕ ಸ್ಥರದಲ್ಲಿ ಭಿನ್ನತೆಯಿರುವ ಸಮಸಮಾಜದ ಉಟೋಪಿಯಾದಲ್ಲಿ ಬದುಕದಿರುವ ನಿಜಜಗತ್ತಿನಲ್ಲಿ ಈ ರೀತಿಯಾದಂತಹ ಪ್ರತಿಕ್ರಿಯೆ ಬರುವುದು ಸಹಜವೂ ಹೌದು, ಸಮಂಜಸವೂ ಹೌದು. ಈ ಮಾತು, ಅದರ ಹಿನ್ನೆಲೆಗೆ, ಪ್ರತಿಕ್ರಿಯೆಯಾಗಿ ನಾನು ಯಾವ ಸ್ಪಷ್ಟ ನಿಲುವನ್ನೂ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೂ ಆ ಬಗ್ಗೆ ನನ್ನ ಅನುಮಾನಗಳನ್ನೂ, ಕಾಳಜಿಯನ್ನೂ, ಸಮಜಾಯಿಷಿಯನ್ನೂ, ಅಸಹಾಯಕತೆಯನ್ನೂ, ಅಷಾಢಭೂತಿತನವನ್ನೂ ಪ್ರಾಮಾಣಿಕವಾಗಿ ಮಂಡಿಸಲು ಸಿದ್ಧನಾಗಿದ್ದೇನೆ.
"ಇಷ್ಟುದಿನ ಆತಂಕ ನಮ್ಮನ್ನು ತಟ್ಟಿದಾಗ ಅದು ಒಂದು....
© ಎಂ.ಎಸ್.ಶ್ರೀರಾಮ್ |
| Reactions: |
ಟಂಕಸಾಲೆಯ ಬಿಂಕ
© ಎಂ.ಎಸ್.ಶ್ರೀರಾಮ್ |
| Reactions: |
ಗೋಡೆ ಗಡಿಯಾರ - ಕೈಗಡಿಯಾರ
© ಎಂ.ಎಸ್.ಶ್ರೀರಾಮ್ |
| Reactions: |
ರಾಮ್ ಗುಹಾಗೆ ಪದ್ಮಭೂಷಣ
© ಎಂ.ಎಸ್.ಶ್ರೀರಾಮ್ |
| Reactions: |
ನನಗೂ ಕೇಸ್ಲಾಗೂ ಅಂಟಿದ ನಂಟು
© ಎಂ.ಎಸ್.ಶ್ರೀರಾಮ್ |
| Reactions: |
ಶಾಂತಾರಾಮ್-ಆತಂಕರಾಮ್
© ಎಂ.ಎಸ್.ಶ್ರೀರಾಮ್ |
| Reactions: |
ಕೋವಲಂನ ಮಣ್ಣು; ಪದ್ಮನಾಭಸ್ವಾಮಿ ಗುಡಿ
© ಎಂ.ಎಸ್.ಶ್ರೀರಾಮ್ |
ಅರವಿಂದ ಅಡಿಗರ ಬಿಳಿಹುಲಿ
© ಎಂ.ಎಸ್.ಶ್ರೀರಾಮ್ |
| Reactions: |
ಕಂದೀಲಿನ ಮೇಲೆ ಧೂಳು!
ಕೈಮಗ್ಗದ ಬಿಕ್ಕಟ್ಟು
ಗೆಂಟ್ ಕೋಟೆಯಲ್ಲಿ ಕೋಕಾಕೋಲಾ
| Reactions: |
ಬ್ರಸಲ್ಸ್ ನಲ್ಲಿ ಭಾರತ!
ಲಕ್ಸಂಬರ್ಗ್ನಿಂದ ಬ್ರಸಲ್ಸ್ ಗೆ ಬಂದದ್ದಾಯಿತು. ಭಾಯಿಸಾಬ್ ಎನ್ನುತ್ತಲೇ ಎರಡು ತಲೆಮಾರಿನ ಹಿಂದೆ ಭಾರತದಿಂದ ವಲಸೆ ಹೋಗಿದ್ದ ರಾಯ್ ಜೊತೆಗೆ ಜೋತುಬಿದ್ದು ಜಿಪಿಎಸ್ ಇದ್ದ ಅವನ ಹೊಸ ಕಾರಿನಲ್ಲಿ ನನ್ನನ್ನು ನಾನೇ ಹೇರಿಕೊಂಡಿದ್ದೆ. ಒಂದು ಥರದಲ್ಲಿ ಭಾರತದ ಯಾವುದೇ ಕೊಂಡಿಯಿದ್ದರೂ ಸಾಕು ಅವರೆಲ್ಲ ನಮ್ಮ ಬಂಧುಗಳೇ. ಎಲ್ಲಿಂದಲಾದರೂ ಒಂದು ಸಂಬಂಧವನ್ನು ನಾವು ಹೆಕ್ಕಿ ತೆಗೆಯುವುದರಲ್ಲಿ ನಿಷ್ಣಾತರು. ವಸುಧೈವ ಕುಟುಂಬಕಂ ಎನ್ನುವ ಕಾನ್ಸೆಪ್ಟನ್ನು ಜಗತ್ತಿಗೆ ಕೊಟ್ಟವರೇ ನಾವಲ್ಲವೇ? ಈಚೆಗೆ ಚಿದಾನಂದ ರಾಜಘಟ್ಟ ನೊಬೆಲ್ ಪುರಸ್ಕೃತರ ಬಗ್ಗೆ ಬರೆಯುತ್ತಾ, ಯಾರನ್ನೆಲ್ಲಾ ಭಾರತೀಯರೆಂದು ಹೇಳಿಕೊಂಡು ನಾವು ವಿನಾಕಾರಣ ಹೆಮ್ಮೆ ಪಡಬಹುದು ಎಂದು ಬರೆದಿದ್ದರು. ಅದರಲ್ಲಿ ನೈಪಾಲರ ಹೆಸರನ್ನೂ ಅವರು ಸೇರಿಸಿದ್ದರು. ನೈಪಾಲರು ಎಷ್ಟು ಭಾರತೀಯರೋ, ರಾಯ್ ಕೂಡಾ ಅಷ್ಟೇ ಭಾರತೀಯ. ಹೀಗಾಗಿ ದೇಶದ ಹೆಸರಿನಲ್ಲಿ ಅವನ ಕಾರಿನಲ್ಲಿ ಹೇರಿಕೊಳ್ಳುವುದು ನನ್ನ ಜನ್ಮದ ಹಕ್ಕಾಗಿತ್ತು. ಭಾಷೆಯ ಪರಿಜ್ಞಾನವಿಲ್ಲದ ಜಾಗದಲ್ಲಿ ಎರಡು ಭಾರೀ ಸೂಟ್ಕೇಸುಗಳನ್ನು ಹೇರಿಕೊಂಡು, ಟ್ಯಾಕ್ಸಿ ಹಿಡಿದು, ಗಂಟೆಗೊಮ್ಮೆ ಬ್ರಸಲ್ಸ್ ಗೆ ಹೋಗುವ ರೈಲನ್ನು ಹತ್ತಿ ಅದರಲ್ಲಿ ಪ್ರಯಾಣ ಮಾಡುವುದಕ್ಕಿಂತ, ಭಾರತೀಯನೆಂದು ಹೇಳಿಕೊಂಡು ಹೇರಿಕೊಂಡು ಹೋಗುವುದೇ ಉತ್ತಮ ಎನ್ನಿಸಿತ್ತು. ಮೇಲಾಗಿ ಈ ಮೂಲಕ ೨೮ ಯೂರೋಗಳನ್ನೂ ಉಳಿಸಿ ಅದರಲ್ಲಿ ಮನೆಗೆ ಬೆಲ್ಜಿಯನ್ ಚಾಕೊಲೇಟುಗಳನ್ನೂ ತರಬಹುದಿತ್ತು!
| Reactions: |
ಲಕ್ಸಂಬರ್ಗ್ನಲ್ಲಿ ಸಸ್ಯಾಹಾರಿ
| Reactions: |
ನಮ್ಮ ನಡುವೆಯೇ ಇರುವ ಸೀಮಂತಿನಿ ನಿರಂಜನ
| Reactions: |
ಹೈದರಾಬಾದ್: ಒಂದೆರಡು ಪುಸ್ತಕ, ಒಂದು ಸಿನೇಮಾ
| Reactions: |
ಇಳಾಬೇನ್ ಮತ್ತು ಸೇವಾ: ಒಂದು ಖಾಸಗೀ ಪ್ರಬಂಧ
| Reactions: |
ಹೈದರಾಬಾದ್: ಏಕೀಕರಣ?
| Reactions: |
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು
ಇತರ ಹಿಂದುಳಿದ ಜಾತಿಯವರಿಗೆ ವಿದ್ಯಾಸಂಸ್ಥೆಗಳಲ್ಲಿ ೨೭% ಮೀಸಲಾತಿ ನೀಡುವಂತಹ ಕಾನೂನನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುತ್ತಿದ್ದಂತೆಯೇ ಸಮಾನತೆ, ಗುಣಮಟ್ಟ ಇತ್ಯಾದಿಯ ಬಗೆಗಿನ ಚರ್ಚೆ ಮತ್ತೆ ಆರಂಭವಾಗಿದೆ. ಈ ಚರ್ಚೆಗೆ ಒಂದು ಸ್ಪಷ್ಟ ಉತ್ತರ ಸಿಗುವುದಾಗಿದ್ದರೆ ಇಷ್ಟು ಗೊಂದಲಮಯ ವಸ್ತುವೇ ಆಗುತ್ತಿರಲ್ಲ. ಇದರಿಂದಾಗಿ ಒ.ಬಿ.ಸಿಗಳಿಗೆ ಒಳಿತಾಗುವುದೇ? ಮೇಲ್ವರ್ಗದವರ ಅವಕಾಶಗಳು ಕಡಿಮೆಯಾಗುವುದೇ? ಎಲ್ಲರನ್ನೂ ಸಮಾನ ಮಾನದಂಡದ ಮೇಲೆ ಅಳೆಯುತ್ತಿದ್ದ ಸಿದ್ಧಾಂತಕ್ಕೆ ಧಕ್ಕೆ ಬಂದಿದೆಯೇ? ಈ ಎಲ್ಲ ಪ್ರಶ್ನೆಗಳೂ ಉದ್ಭವಿಸುತ್ತವೆ. ಜಟಿಲವಾದ ಈ ವಿಷಯದ ನಿರಚನೆ ಅಷ್ಟೇ ಜಟಿಲವಾದದ್ದು.
ಸರ್ವರಿಗೂ ಸಮಬಾಳು ಅನ್ನುವ ಮಾತು ಎಂದಿಗಾದರೂ ನಿಜವಾಗಲು ಸಾಧ್ಯವೇ?
| Reactions: |
ಸಾಲಮನ್ನಾ ರಾಜಕಾರಣ
ಮುಂದೆ...
| Reactions: |
ರೀತಿ ರೀವಾ-ಜು, ಸಿದ್ದಿ, ಭಯಭೀತಿ.... ಮತ್ತು ಈ ಎಲ್ಲದರ ನಡುವೊಂದು ಅದ್ಭುತ ಜಲಪಾತ
| Reactions: |
ವೈನ್ಕೆ-ರಾಜುಮೇಷ್ಟ್ರು: ತಲೆಮಾರುಗಳಿಗಿಬ್ಬರು
| Reactions: |
ತಂಜಾವೂರಿನ ಬೃಹದೀಶ್ವರ
ಮುಂದೆ....
| Reactions: |
ಜೈ ಅಂತ - ವಾಹ್ ತಾಜ್

ಮುಂದೆ....
| Reactions: |
ಶಿಸ್ತಿನ ಚಿತ್ತಾಲರಿಗೆ ಪಂಪ...
ಮುಂದೆ...
| Reactions: |
ಮಾವೋತೊ ನಕ್ಸಲ್
೧
ಆರು ವರ್ಷಗಳ ಹಿಂದೆ, ನೌಕರಿಗೆಂದು ಹೈದರಾಬಾದ್ ಹೊಕ್ಕಾಗ, ಮೊದಲ ಬಾರಿಗೆ ಕಾಳಜಿಪೂರ್ವಕವಾಗಿ ನಕ್ಸಲೈಟ್ ಎಂಬ ಪದ ಬಳಕೆಯಾಗುವುದನ್ನು ಕಂಡೆ.
ಅದಕ್ಕೂ ಮೊದಲು -
ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾದಲ್ಲಿ ಓದಿದ್ದ - ಸಿಲಿಗುಡಿಯ ಬಳಿಯ ನಕ್ಸಲ್ಬರಿ ಗ್ರಾಮದ ರೈತಾಂಗ ಬಂಡೆದ್ದ ಕಥೆ, ಮಿಥುನ್ ಚಕ್ರಬೋರ್ತಿ ಎಂಬಂಥ ಹಿಂದಿ ಚಿತ್ರನಟ ಹಿಂದೆ ನಕ್ಸಲೈಟ್ ಆಗಿದ್ದ ಎಂಬ ವದಂತಿ, ಈ ಎಲ್ಲವೂ, ೧೮೯೫ರಲ್ಲಿ ಬಂಡೆದ್ದು ದಂತ ಕಥೆಯಾದ ಬಿರ್ಸಾ ಮುಂಡಾನ ಕಥೆಯಷ್ಟೇ, ಅಥವಾ ತೆಲಂಗಾಣಾ ರೈತಾಂಗ ಹೋರಾಟದಲ್ಲಿ ಅಮರನಾದ ದೊಡ್ಡಿ ಕೊಮುರಯ್ಯನ ಕಥೆಯಷ್ಟೇ ಪರಕೀಯವಾಗಿ ನನ್ನಂತರಂಗವನ್ನ ಹೊಕ್ಕಿತ್ತು.
| Reactions: |
ಇಕೊಳ್ಳಿ ಉಂಬರ್ಟೋ!
| Reactions: |
ಹೈದರಾಬಾದ್: ಮೂರು ಕಾದಂಬರಿಗಳು
ಮುಂದೆ...
| Reactions: |
ಒಡೆದ ಹೃದಯ; ಮಿಡಿದ ಹೃದಯ
`ಚರಿತ್ರೆಯಿಂದ ಪಾಠ ಕಲಿಯದವರು ಅದನ್ನು ಪುನಃ ಜೀವಿಸುವ ಶಾಪ ಪಡೆಯುತ್ತಾರೆ' ಎಂದು ಹೇಳಿದ್ದು ತತ್ವಜ್ಞಾನಿ ಜಾರ್ಜ್ ಸಾಂತಾಯನ. ಸಾಂತಾಯನನ ಮಾತಿನ ಸತ್ಯಾಸತ್ಯತೆ ಸ್ವಲ್ಪ ಕುತೂಹಲದ ವಿಷಯ.
ಚರಿತ್ರೆ:
`ಯಾವುದೇ ಜನಾಂಗದಲ್ಲಿ ಕೋಮುಸೌಹಾರ್ದತೆಯನ್ನು ಮುಂದುವರೆಸಿ ಬರಲು ಕೆಲವು ವಿಶೇಷ ಕ್ರಮ ಕೈಗೊಳ್ಳುನ ಅಗತ್ಯ ಬೀಳುತ್ತಿತ್ತು. ಇಂಥ ಒಂದು ಸಂದರ್ಭದಲ್ಲಿ ನಿಜಾಮನೇ ಸ್ವತಃ ಹೀಗೊಂದು ಕ್ರಮ ಕೈಗೊಳ್ಳುವ ಪರಿಸ್ಥಿತಿ ಒದಗಿ ಬಂತು (ನಿಜಾಮ: ಮಹಬೂಬ್ ಅಲಿ ಪಾಷಾ - ೧೮೬೬-೧೯೧೧). ಅನೇಕ ಭಾರತೀಯ ಹಬ್ಬಗಳು ಚಾಂದ್ರಮಾನ ಪಂಚಾಂಗಕ್ಕನುಸಾರವಾಗಿ, ವರ್ಷದ ಬೇರೆ ಬೇರೆ ತಿಂಗಳುಗಳಲ್ಲಿ ಘಟಿಸುವುದುಂಟು. ಹೀಗಾಗಿ ಎರಡು ಭಿನ್ನ ಹಬ್ಬಗಳು ಒಂದೇ ದಿನ ಬೀಳುವ ಸಾಧ್ಯತೆಯೂ ಉಂಟು. ಇಂಥ ಒಂದು ಕಾಕತಾಳೀಯ ಶಿಯಾ ಮುಸಲ್ಮಾನರ ದುಃಖಭರಿತ ಮೊಹರಂ ತಿಂಗಳಿಗೂ, ಸಂತೋಷದಿಂದ ಬಣ್ಣ ಎರಚುವ ಹೋಳಿ ಹುಣ್ಣಿಮೆಗೂ ನಡುವೆ ಉಂಟಾಯಿತು.'
ಮುಂದೆ...
| Reactions: |
ಗ್ರಾಮೀಣ್ನಿಂದ ಗ್ರಾಮೀಣ್ ಬ್ಯಾಂಕ್ನತ್ತ: ಬೆಳವಣಿಗೆಯ ಪಥ.
ಯೂನಸ್ಗೆ ನೊಬೆಲ್ ಪ್ರಶಸ್ತಿ ಬಂದಾಗಿನಿಂದಲೂ ಅವರ ಗ್ರಾಮೀಣ್ ವಿತ್ತಪದ್ಧತಿಯ ಬಗ್ಗೆ ಜಗದಾದ್ಯಂತ ಆಸಕ್ತಿ ಬೆಳೆದಿರುವುದಲ್ಲದೇ ಅವರ ಸಂಸ್ಥೆಯ ಕಾರ್ಯವೈಖರಿ ಗ್ರಾಮೀಣವಿಕಾಸದಲ್ಲಿ ಹಾಗೂ ಬ್ಯಾಂಕಿಂಗ್ನಲ್ಲಿ ಒಲವಿರುವ ಎಲ್ಲರ ಕುತೂಹಲವನ್ನೂ ಕೆರಳಿಸಿದೆ. ಇದು ಸಾಲದ್ದಕ್ಕೆ ಆ ಪದ್ಧತಿಯನ್ನು ಅನುಸರಿಸಿ ಧಂಧೆ ನಡೆಸುವ ಬಂಡವಾಳಹೂಡಿಕೆದಾರರ ಗಮನವನ್ನೂ "ಗ್ರಾಮೀಣ್" ತನ್ನೆಡೆಗೆ ಸೆಳೆದುಕೊಂಡಿದೆ. ಗ್ರಾಮೀಣ್ ಬಗ್ಗೆ ಅನೇಕ ವಿದ್ವಾಂಸರು, ಪತ್ರಕರ್ತರು ಬರೆದಿದ್ದಾರಾದರೂ, ಆ ಸಂಸ್ಥೆಯ ಬಗ್ಗೆ ಈಚೆಗೆ ಬಂದಿರುವ ಹೊಸ ಪುಸ್ತಕ ಆತ್ಮಚರಿತ್ರೆಯ ಮಾದರಿಯದ್ದು. ಅದರ ಲೇಖಕರಾದ ದೀಪಲ್ ಬರೂವ ಗ್ರಾಮೀಣ್ ಸಂಸ್ಥೆಯ ಉಪ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಆಸಿಫ್ ದೌಲಾ ಗ್ರಾಮೀಣ್ ಸ್ಥಾಪಿಸಿದ ಮೂಲ ತಂಡದಲ್ಲಿ ಕೆಲಸ ಮಾಡಿದ್ದ ಯೂನಸ್ ವಿದ್ಯಾರ್ಥಿ.
ಶಕುಂತಳಾ ತಂದ ಹೊಸ ಹುರುಪು
| Reactions: |
ತೇಜಸ್ವಿ ಇದ್ದಾರೆ
ಕಾವೇರಿ ಆದೇಶ: ಕೆಲವು ಪ್ರಶ್ನೋತ್ತರಗಳು
ಬಹಳ ದಿನಗಳಿಂದ ನಿರೀಕ್ಷಿಸಿದ್ದ ಕಾವೇರಿ ಆಯೋಗದ ಅಂತಿಮ ತೀರ್ಪು ಕಡೆಗೂ ಬಂದಿದೆ. ಮೊದಲಿಗೆ ಆಯೋಗದಲ್ಲೇ ಕೆಲವು ಭಿನ್ನಾಭಿಪ್ರಾಯಗಳಿರಬಹುದೆಂಬ ಸೂಚನೆಗಳು ಇದ್ದುವಾದರೂ ಅದು ಸರ್ವಾನುಮತದ ತೀರ್ಪೆಂಬುದು ತೃಪ್ತಿಯ ಮಾತು. ಇದರಿಂದ ಆಯೋಗ ಮುಕ್ತಿ ಪಡೆದಂತಾಗಿದೆ. ಈ ಲೇಖನದ ಮುಖ್ಯ ಉದ್ದೇಶ ಆಯೋಗದ ತೀರ್ಪಿಗೆ ಪತ್ರಿಕೆಗಳಲ್ಲಿ ಬಂದಿರುವ ಕೆಲ ಪ್ರತಿಕ್ರಿಯೆಗಳನ್ನು ಪರಿಗಣಿಸಿ, ಅವುಗಳ ವಿಷಯದಲ್ಲಿ ಕೆಲವು ಸ್ಪಷ್ಟೀಕರಣಗಳನ್ನು ನೀಡುವುದಕ್ಕೆ ಸೀಮಿತವಾಗಿದೆ. ಕಾವೇರಿ ವಿವಾದದ ಇತಿಹಾಸ, ಅಲ್ಲಿಂದ ಮುಂದೆ ನಡೆದ ಪ್ರಕ್ರಿಯೆಗಳು ಮತ್ತು ಅಂತಿಮವಾಗಿ ಬಂದ ತೀರ್ಪು - ಈ ಘಟ್ಟಗಳನ್ನು ಮೊದಲಿಗೆ ಪರಿಶೀಲಿಸೋಣ. ನಂತರ ತೀರ್ಪಿನ ಹೂರಣವನ್ನು ಅರ್ಥಮಾಡಿಕೊಳ್ಳೋಣ. ತದನಂತರ ಈ ತೀರ್ಪಿಗೆ ಬಂದ ಪ್ರತಿಕ್ರಿಯೆಗಳನ್ನು ಚರ್ಚಿಸೋಣ. [ಈ ವಿವಾದದ ಇತಿಹಾಸವು ಇದೇ ಲೇಖಕರ ಹಿಂದಿನ ಬರಹಗಳ ಮೇಲೆ ಆಧರಿತವಾಗಿವೆ]
ಮಾತು ಮಾತು ಮಥಿಸಿ, ಹೊಸೆದು ಕವಿತೆ ಹೊಸದು..
ಚಿತ್ತಾಲರ ಬೇನ್ಯಾ: ಕೆಲವು ಟಿಪ್ಪಣಿಗಳು
ಮಹಾರಾಣಿಲಕ್ಷ್ಮೀ ಅಮ್ಮಣ್ಣಿ ಕಾಲೇಜಿಗಾಗಿ ನನಗೆ ಬಂದ ಕರೆಯ ಸಂದರ್ಭ ಚಿತ್ತಾಲರ ಕಥೆಯಿಂದ ಆಯ್ದ ಭಾಗದಂತೆ ಇರುವುದರಿಂದ ಆ ಕಾಕತಾಳೀಯವನ್ನು ಮೊದಲು ಇಲ್ಲಿ ಹೇಳಲೇಬೇಕು ಅನ್ನಿಸುತ್ತದೆ. ಮೊದಲಿಗೆ ಒಂದು ಸಂಜೆ ನಾನು ಮನೆಗೆ ಬಂದಾಗ ಅಮೆರಿಕೆಯಿಂದ ಬಂದಿದ್ದ ನನ್ನ ಭಾವ "ನಿನ್ನನ್ನು ಹುಡುಕಿ ಯಾರೋ ಬಂದಿದ್ದರು. ಯಾವುದೋ ಕಾಲೇಜಿನವರಂತೆ. ಹೆಚ್ಚು ವಿವರಗಳು ಗೊತ್ತಿಲ್ಲ, ಅವರ ಯಾವುದೋ ಸಮಾರಂಭಕ್ಕೆ ನೀನು ಹೋಗಬೇಕಂತೆ" ಎಂದಷ್ಟೇ ಹೇಳಿ ನನ್ನನ್ನು ಕುತೂಹಲದಲ್ಲಿ ಮುಳುಗಿಸಿದರು. ಯಾರು, ಯಾವ ಕಾಲೇಜು, ಸಂದರ್ಭವೇನು ತಿಳಿಯದು.
ಚಿಕ್ಕಸಾಲಿಗ - ಮಹಮ್ಮದ್ ಯೂನಸ್
- ಬಡವರು ಬಡಪಾಯಿಗಳು ಅಸಹಾಯಕರೆಂಬ ನಂಬುಗೆ;
- ಅದರಲ್ಲೊ ಹೆಂಗಸರು ಪಾಪದವರೆಂಬ ನಂಬುಗೆ;
- ಭೂಹೀನರು, ಬಡವರು ಸಾಲಕ್ಕೆ ಅರ್ಹರಲ್ಲ, ಅವರಿಂದ ಹಣ ವಾಪಸ್ಸಗುವುದಿಲ್ಲ ಅನ್ನುವ ನಂಬುಗೆ
- ಬಡವರಿಗೆ ಸಹಕರಿಸಲು ಗೊತ್ತಿಲ್ಲ, ಭವಿಷ್ಯದ ಬಗ್ಗೆ ಯೋಚಿಸಬೇಕೆಂದು ತೋಚುವುದಿಲ್ಲ, ತಮ್ಮ ಒಳಿತಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿಲ್ಲ, ಸಾಲ ಪಡೆದು ಅದನ್ನು ಮರುಪಾವತಿಸುವ ಶಿಸ್ತು ಅವರಲ್ಲಿಲ್ಲ ಅನ್ನುವ ನಂಬುಗೆ
- ಆರ್ಥಿಕ ವಿಕಾಸವಾಗುವುದು ದೊಡ್ಡ ಮೊತ್ತದ ಸರಕಾರಿ ವಲಯದಿಂದ ಬರುವ ಕೇಂದ್ರೀಕೃತ ಯೋಜನೆಗಳಿಂದ ಮಾತ್ರ ಅನ್ನುವ ನಂಬುಗೆ
ಅಧ್ಯಕ್ಷ ರಾಕೆಫೆಲ್ಲರ್ ಫೌಂಡೇಷನ್
ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಕೋಪ ತಾಪ

ಈಚೆಗೆ ವಾರ್ತೆಗಳನ್ನು ಕೇಳುವುದು, ನೋಡುವುದು, ಓದುವುದು ಎಲ್ಲ ಹಿಂಸೆಯುಂಟುಮಾಡುತ್ತದೆ. ಪ್ರೀತಿ ನಿಷ್ಕಾರಣವಾಗಿರಬೇಕು, ದ್ವೇಷ ಸಕಾರಣವಾಗಿರಬೇಕು ಅಂತ ಜಯಂತ ಕಾಯ್ಕಿಣಿ ಹಿಂದೆ ಒಮ್ಮೆ ಜನಪರ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದರು. ಇದನ್ನೇ ಕೇಳಿಸಿಕೊಂಡಿರಬಹುದಾದ ಫಿಲಿಪೀನ್ಸ್ ದೇಶದ ಯುವಕ ಕಂಪ್ಯೂಟರ್ ವೈರಸ್ ಪ್ರೋಗ್ರಾಂ ಬರೆದು, ಅದಕ್ಕೆ ಐಲವ್ಯೂ ಅಂತ ಹೆಸರುಟ್ಟು ಜಗತ್ತಿನ ಮೇಲೆ ಛೂ ಬಿಟ್ಟ. ನಿಷ್ಕಾರಣ ಪ್ರೀತಿ ಅರಸಿ ಹೊರಟ ನನ್ನಂತಹ ಕೆಲವರು ಹಲವು ದಿನ ನಿದ್ದೆಗೆಟ್ಟು ಸಕಾರಣವಾಗಿಯೇ ಅವನನ್ನ ದ್ವೇಷಿಸತೊಡಗಿದ್ದೇವೆ. ಇರಲಿ.
ಮುಂದೆ ಓದಿ
ಬೆಂಗಳೂರಿಗನಾಗಿರುವ ಭರಿಸಲಾಗದ ಹಗುರ ಭಾವ
ಚಿಂತಾಮಣಿಯಲ್ಲಿ ಕಂಡ ಮುಖ
ಮುಂದೆ....
ಚೆ ಜೊತೆ ಪ್ರವಾಸ
ಮೋಟರ್ ಸೈಕಲ್ ಡೈರೀಸ್ - ಭಾಗ ೨
© ಎಂ.ಎಸ್.ಶ್ರೀರಾಮ್ |
ಮೋಟರ್ಸೈಕಲ್ ಡೈರೀಸ್: ಪುಸ್ತಕ ಮತ್ತು ಚಲನಚಿತ್ರ
© ಎಂ.ಎಸ್.ಶ್ರೀರಾಮ್ |
ಕನ್ನಡಕ್ಕಿನ್ನೊಂದು ಪತ್ರಿಕೆ, ಕನ್ನಡ ಕಾವ್ಯ, ಕೆಲವು ಇತರ ವಿಚಾರಗಳು
ದೇಶಕಾಲದ ಬಗ್ಗೆ ಚರ್ಚಿಸುತ್ತಿರುವಾಗಲೇ ಕನ್ನಡಕ್ಕೆ ಮತ್ತೊಂದು ಸಣ್ಣ ಪತ್ರಿಕೆಯ ಪ್ರವೇಶವಾಗಿದೆ. ಇದು ವಸಂತ ಬನ್ನಾಡಿಯವರು ಇತ್ತೀಚೆಗೆ ಹೊರತಂದ ಅರೆವಾರ್ಷಿಕ ಪತ್ರಿಕೆ ಶಬ್ದಗುಣ. ದೇಶಕಾಲದ ಬಗ್ಗೆ ನಾನು ನಾಲ್ಕು ಸಂಚಿಕೆಗಳ ನಂತರ ಬರೆದೆನಾದರೂ ಇದರ ಬಗ್ಗೆ ನಾನು ತಕ್ಷಣವೇ ಬರೆಯುತ್ತಿರುವುದಕ್ಕೆ ಕಾರಣಗಳು ಹಲವು. ಮೊದಲ ಭಾಗದಲ್ಲಿ ನಾನು ಈ ಪತ್ರಿಕೆಯ ಸ್ಥಾನ, ಉದ್ದೇಶ, ವಿನ್ಯಾಸದ ಬಗೆ ಚರ್ಚಿಸುತ್ತೇನೆ. ಎರಡನೆಯ ಭಾಗದಲ್ಲಿ ಈ ಸಂಚಿಕೆಯನ್ನು ಆಧಾರವಾಗಿಟ್ಟುಕೊಂಡು ಸಮಕಾಲೀನ ಕನ್ನಡಕಾವ್ಯದ ಬಗ್ಗೆ ಕೆಲವು ಪ್ರತಿಕ್ರಿಯೆಗಳನ್ನು ಬರೆಯುತ್ತೇನೆ. ಕಡೆಯದಾಗಿ ಕಾವ್ಯವಲ್ಲದೇ ಈ ಸಂಚಿಕೆಯಿಂದ ಹೊರಹೊಮ್ಮಿರುವ ಕೆಲವು ವಿಚಾರಗಳನ್ನು ಚರ್ಚೆ ಮಾಡುವ ಉದ್ದೇಶ ನನಗಿದೆ. ಅಂದರೆ ಶಬ್ದಗುಣದಲ್ಲಿ ಸಾಕಷ್ಟು ಹೂರಣವಿದೆ ಅಂತ ನಾನು ಒಪ್ಪಿದಂತಾಯಿತು. ಅದು ನಿಜವೂ ಸಹ.
© ಎಂ.ಎಸ್.ಶ್ರೀರಾಮ್ |
| Reactions: |
ರೂಮಿ ಟೋಪಿ
ಮುಂದೆ....
© ಎಂ.ಎಸ್.ಶ್ರೀರಾಮ್ |
| Reactions: |
ರಾಶೊಮೊನ್: ಭೂತ, ವರ್ತಮಾನ
ಅಗಸೆಯ ಅಂಗಳದಲ್ಲಿ ವಿನಾಯಕ ಪಂಡಿತರು ಕುರಸೊವಾನ ಚಿತ್ರಗಳ ಬಗ್ಗೆ ಒಂದು ಒಳ್ಳೆಯ ಪ್ರಬಂಧವನ್ನು ಬರೆದಿದ್ದಾರೆ. ನನಗೆ ಕುರಾಸೊವಾನ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ರಾಶೊಮೊನ್ ಚಿತ್ರದ ಡಿ.ವಿ.ಡಿ ದೊರೆತಾಗ ಅದನ್ನು ಹಲವು ಬಾರಿ ನೋಡಿದೆ. ಈ ಚಿತ್ರಕ್ಕೆ ಮೂಲ ಆಧಾರ ರೈನೊಸುಕೆ ಅಕುಟಗವಾರ ಎರಡು ಕಥೆಗಳು.
ರಾಶೋಮನ್ ಕಥೆ ನನ್ನ ಕೈಗೆ ಸಿಕ್ಕಿಲ್ಲ ಆದರೆ ಅದರ ಸಾರ ಇಲ್ಲಿದೆ. ಕ್ಯೋಟೋ ನಗರದ ಅಂಚಿನಲ್ಲಿರುವ ರಾಶೊಮನ್ ಗೇಟಿನಲ್ಲಿ ಆ ಕಥೆ ಘಟಿಸುತ್ತದೆ. ಆಗಷ್ಟೇ ಕೆಲಸ ಕಳೆದುಕೊಂಡ ಬಡಪಾಯಿಯೊಬ್ಬ ಅಲ್ಲಿಗೆ ಬರುತ್ತಾನೆ. ಬೆಂಕಿ, ಭೂಕಂಪ, ಅಕಾಲಕ್ಕೆ ಈಡಾಗಿರುವ ಕ್ಯೋಟೊ ದುಃಖದಾಯೀ ಸ್ಥಿತಿಯಲ್ಲಿದೆ. ಅಲ್ಲಿ ಕುಳಿತು ಸತ್ತವರ ಜುಟ್ಟನ್ನು ಕತ್ತರಿಸಿ ವಿಗ್ ಮಾಡಿ ಮಾರುತ್ತಿರುವ ಮುದುಕಿ ತನ್ನ ಜೀವನೋಪಾಯಕ್ಕೆ ಇದನ್ನು ಮಾಡುವುದರಲ್ಲಿ ತಪ್ಪೇನೂ ಇಲ್ಲವೆಂದು ಸಮರ್ಥಿಸಿಕೊಳ್ಳುತ್ತಾಳೆ. ಇಂಥ ಕ್ರೂರ ಜಗತ್ತಿನಲ್ಲಿ ಜೀವಿಸಲು ಏನು ಮಾಡಿದರೂ ತಪ್ಪಿಲ್ಲವೆಂದು ಅವಳಿಂದ ಬೊಧನೆ ಪಡೆದ ಆತ ಅವಳ ಬಟ್ಟೆಗಳನ್ನೇ ಕದ್ದು ಓಡಿಹೋಗುತ್ತಾನೆ.
© ಎಂ.ಎಸ್.ಶ್ರೀರಾಮ್ |
| Reactions: |
ಕುರಿಯನ್: ಒಂದು ಖಾಸಗೀ ಪ್ರಬಂಧ
ಮುಂದೆ....
© ಎಂ.ಎಸ್.ಶ್ರೀರಾಮ್ |
| Reactions: |
ಕನ್ನಡ ರಾಷ್ಟ್ರೀಯತೆ, ಭಾಷಾ ಹೋರಾಟ ಬ್ಯಾಂಗಲೋರ್ ಮತ್ತು ಸಿಂಗರ್
ಮುಂದೆ....
© ಎಂ.ಎಸ್.ಶ್ರೀರಾಮ್ |
| Reactions: |
ನಾವೇಕೆ ಬ್ಲಾಗ್ ಮಾಡುತ್ತೇವೆ!
ನಿಮಗೆ ಬ್ಲಾಗ್ ಬರೆಯುವ ಐಡಿಯಾ ಬಂದದ್ದು ಹೇಗೆ?
ನನಗೆ ಬ್ಲಾಗ್ ಬರೆಯುವ ಐಡಿಯಾ ನನ್ನ ವಿದ್ಯಾರ್ಥಿಗಳಿಂದ ಬಂತು. ಅಂತರ್ಜಾಲದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಬರೆಯುವುದನ್ನ, ಮುಖ್ಯವಾಗಿ ನನ್ನದೇ ಪಾಠಗಳ ಬಗ್ಗೆ ಬೆರೆಯುವುದನ್ನ ಕಂಡಾಗ ನನಗೆ ಅದರ ಅದ್ಭುತ ಸಾಧ್ಯತೆ ಗೋಚರವಾಯಿತು. ಸಾಲದ್ದಕ್ಕೆ ನಾನು ಒಂದೆರಡು ವರ್ಷಗಳಿಂದ ಕನ್ನಡದಲ್ಲಿ ಬರವಣಿಗೆಯನ್ನು ನಿಲ್ಲಿಸಿಬಿಟ್ಟಿದ್ದೆ.ಇದಕ್ಕೆ ಕಾರಣ ನನ್ನ ಇಂಗ್ಲೀಷ್ ಬರಹವನ್ನು ಕಂಪ್ಯೂಟರ್ನಲ್ಲಿ ಬರೆಯುತ್ತಿದ್ದುದರಿಂದ ಕಾಗದದ ಮೇಲೆ ಕೈನಲ್ಲಿ ಬರೆಯುವ ಅಭ್ಯಾಸ ತಪ್ಪಿಹೋಗಿತ್ತು. ಕನ್ನಡದಲ್ಲಿ ನಾನು ಐ-ಲೀಪ್ ಉಪಯೋಗಿಸುತ್ತಿದ್ದೆ.
© ಎಂ.ಎಸ್.ಶ್ರೀರಾಮ್ |
| Reactions: |
ಕನಸು ಕಟ್ಟುವ ಕಾಲ
ಮುಂದೆ ಓದಿ
© ಎಂ.ಎಸ್.ಶ್ರೀರಾಮ್ |
| Reactions: |
ಮೇಧಾ- ಮುಂದೇನು?
© ಎಂ.ಎಸ್.ಶ್ರೀರಾಮ್ |
| Reactions: |
ಆಗ್ಡೆನ್ ನ್ಯಾಶ್ ಎಂಬ punಡಿತ
ಪದಚಮತ್ಕಾರ ಶ್ಲೇಷೆ, ವಿಕಟಾರ್ಥ, ನಾನ್ಸೆನ್ಸ್, ಅರ್ಥರಹಿತ ಪ್ರಾಸ, ಅರ್ಥಪೂರ್ಣ ಪ್ರಾಸ, ಈ ಎಲ್ಲವನ್ನೂ ಪ್ರತಿನಿಧಿಸಲು ಒಂದೇ ಹೆಸರು ಬೇಕು ಎನ್ನುವುದಾದರೆ ನಾವು ಆಗ್ಡೆನ್ ನ್ಯಾಶ್ರನ್ನು ನೆನಪುಮಾಡಿಕೊಳ್ಳಬಹುದು. ನಾನ್ಸೆನ್ಸ್ ಪದ್ಯಗಳ ರಚನೆಯ ರೀತಿಗೇ ಹಲವು ಆಯಾಮಗಳನ್ನು ನೀಡಿದ ಕವಿ ನ್ಯಾಶ್. ನ್ಯಾಶ್ ಬಗ್ಗೆ ಯಾರೇ ಬರೆದರೂ ಓದಲು ಖುಷಿಯಾಗುತ್ತದೆ. ಕಾರಣ: ಎಷ್ಟೇ ಒಣ ವಿಮರ್ಶಕ ಲೇಖನ ಬರೆದರೂ ನ್ಯಾಶ್ರ ಕವಿತೆಗಳ ತುಣುಕುಗಳು ಉದಾಹರಣೆಯಾಗಿ ಬರುವುದರಿಂದ, ತನ್ನಿಂದತಾನೇ ಆ ಲೇಖನಕ್ಕೆ ಜೀವ ಬಂದುಬಿಡುತ್ತದೆ.
© ಎಂ.ಎಸ್.ಶ್ರೀರಾಮ್ |
| Reactions: |