Showing posts with label ವೈಎನ್ಕೆ. Show all posts
Showing posts with label ವೈಎನ್ಕೆ. Show all posts

ವೈನ್‍ಕೆ-ರಾಜುಮೇಷ್ಟ್ರು: ತಲೆಮಾರುಗಳಿಗಿಬ್ಬರು


ಇಬ್ಬರು ಭಿನ್ನ ವ್ಯಕ್ತಿಗಳನ್ನು ಒಂದೇ ಲೇಖನದಡಿ ಯಾಕೆ ತರುತ್ತಿರುವೆ ಅನ್ನುವುದು ನನಗೇ ತಿಳಿಯುತ್ತಿಲ್ಲ ವೈ‌ಎನ್‍ಕೆ ತೀರಿಕೊಂಡರು ಅನ್ನುವ ಸುದ್ದಿ ಬಂದ ದಿನ ಮನಕ್ಕೆ ಆದಷ್ಟೇ ನೋವು ರಾಜು ತೀರಿಕೊಂಡ ದಿನವೂ ಆಯಿತು. ಏನೂ ಮಾತಾಡಲು ತೋಚಲಿಲ್ಲ, ಇದ್ದಕ್ಕಿದ್ದಂತೆ ಮಾಯವಾದ ಈ ಇಬ್ಬರೂ ನನ್ನ ವಾರಗೆಯವರು, ತಕ್ಷಣದ ಹಿರಿಯರು, ಅವರಿಗಿಂತ ಹಿರಿಯರು ನನಗಿಂತ ಕಿರಿಯರು, ಅವರಿಗಿಂತ ಕಿರಿಯರು.. ಹೀಗೆ ವಯಸ್ಸಿನ ಭೇದವಿಲ್ಲದೇ ಎಷ್ಟೋ ಜನರನ್ನು ಪ್ರೋತ್ಸಾಹಿಸಿ, ಅವರ ಬರಹಗಳನ್ನು ಪ್ರಕಟಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದವರು. ಇಬ್ಬರೂ ಹೇಳದೇ ಕೇಳದೇ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟರು.


ಮುಂದೆ...



ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಕೋಪ ತಾಪ

ಈಚೆಗೆ ವಾರ್ತೆಗಳನ್ನು ಕೇಳುವುದು, ನೋಡುವುದು, ಓದುವುದು ಎಲ್ಲ ಹಿಂಸೆಯುಂಟುಮಾಡುತ್ತದೆ. ಪ್ರೀತಿ ನಿಷ್ಕಾರಣವಾಗಿರಬೇಕು, ದ್ವೇಷ ಸಕಾರಣವಾಗಿರಬೇಕು ಅಂತ ಜಯಂತ ಕಾಯ್ಕಿಣಿ ಹಿಂದೆ ಒಮ್ಮೆ ಜನಪರ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದರು. ಇದನ್ನೇ ಕೇಳಿಸಿಕೊಂಡಿರಬಹುದಾದ ಫಿಲಿಪೀನ್ಸ್ ದೇಶದ ಯುವಕ ಕಂಪ್ಯೂಟರ್ ವೈರಸ್ ಪ್ರೋಗ್ರಾಂ ಬರೆದು, ಅದಕ್ಕೆ ಐಲವ್ಯೂ ಅಂತ ಹೆಸರುಟ್ಟು ಜಗತ್ತಿನ ಮೇಲೆ ಛೂ ಬಿಟ್ಟ. ನಿಷ್ಕಾರಣ ಪ್ರೀತಿ ಅರಸಿ ಹೊರಟ ನನ್ನಂತಹ ಕೆಲವರು ಹಲವು ದಿನ ನಿದ್ದೆಗೆಟ್ಟು ಸಕಾರಣವಾಗಿಯೇ ಅವನನ್ನ ದ್ವೇಷಿಸತೊಡಗಿದ್ದೇವೆ. ಇರಲಿ.

ಮುಂದೆ ಓದಿ


ಆಗ್ಡೆನ್ ನ್ಯಾಶ್ ಎಂಬ punಡಿತ

ಪದಚಮತ್ಕಾರ ಶ್ಲೇಷೆ, ವಿಕಟಾರ್ಥ, ನಾನ್‌ಸೆನ್ಸ್, ಅರ್ಥರಹಿತ ಪ್ರಾಸ, ಅರ್ಥಪೂರ್ಣ ಪ್ರಾಸ, ಈ ಎಲ್ಲವನ್ನೂ ಪ್ರತಿನಿಧಿಸಲು ಒಂದೇ ಹೆಸರು ಬೇಕು ಎನ್ನುವುದಾದರೆ ನಾವು ಆಗ್ಡೆನ್ ನ್ಯಾಶ್‌ರನ್ನು ನೆನಪುಮಾಡಿಕೊಳ್ಳಬಹುದು. ನಾನ್ಸೆನ್ಸ್ ಪದ್ಯಗಳ ರಚನೆಯ ರೀತಿಗೇ ಹಲವು ಆಯಾಮಗಳನ್ನು ನೀಡಿದ ಕವಿ ನ್ಯಾಶ್. ನ್ಯಾಶ್ ಬಗ್ಗೆ ಯಾರೇ ಬರೆದರೂ ಓದಲು ಖುಷಿಯಾಗುತ್ತದೆ. ಕಾರಣ: ಎಷ್ಟೇ ಒಣ ವಿಮರ್ಶಕ ಲೇಖನ ಬರೆದರೂ ನ್ಯಾಶ್‌ರ ಕವಿತೆಗಳ ತುಣುಕುಗಳು ಉದಾಹರಣೆಯಾಗಿ ಬರುವುದರಿಂದ, ತನ್ನಿಂದತಾನೇ ಆ ಲೇಖನಕ್ಕೆ ಜೀವ ಬಂದುಬಿಡುತ್ತದೆ.