ಸಂಶೋಧನೆ, ವಿದ್ಯೆ, ಮತ್ತು ಖಾಸಗೀಕರಣ

ಕ್ಯಾನ್ಸರ್ ಗೆ ಬಳಸುವ ಔಷಧಿಯಾದ ಗ್ಲಿವೆಕ್ಕನ್ನು ತಯಾರಿಸಿ ಮಾರಾಟಮಾಡುವ ಏಕಸ್ವಾಮ್ಯ ಹಕ್ಕಿಗೆ ಅರ್ಜಿ ಸಲ್ಲಿಸಿದ್ದ ನೊವಾರ್ಟಿಸ್ ಸಂಸ್ಥೆಯ ಮನವಿಯನ್ನು ತಿರಸ್ಕರಿಸಿ ಭಾರತದ ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ನೀಡಿದೆ. ನೊವಾರ್ಟಿಸ್ ಸಂಸ್ಥೆ ಗೊಣಗುತ್ತಲೇ, ಭಾರತದ ಸಂದರ್ಭದಲ್ಲಿ ಮುಂದೆ ಹೊಸ ಔಷಧಗಳ ಸಂಶೋಧನೆಗೆ ಹಣ ಹೂಡುವುದು ಕಷ್ಟವೆಂಬ ಬೆದರಿಕೆ ಹಾಕಿ ಈ ತೀರ್ಪನ್ನು ಒಪ್ಪಿದೆ. ಜೀವವನ್ನುಳಿಸುವ ಔಷಧವನ್ನು ಯಾವ ಬೆಲೆಗೆ ಮಾರಬೇಕು, ಅದನ್ನು ರೂಪಿಸಲಾಗುವ ಸಂಶೋಧನೆಯ ಖರ್ಚನ್ನು ಯಾರು ಭರಿಸಬೇಕು ಅನ್ನುವುದು ಬಹು ಚರ್ಚಿತ ಮಾತು. ವೈದ್ಯಕೀಯ ಕ್ಷೇತ್ರದಲ್ಲಿ ಜನರ ಜೀವ ಒಳಗೊಂಡಿರುವುದರಿಂದ ಈ ಚರ್ಚೆ ಹೆಚ್ಚಿನ ಮಹತ್ವವನ್ನು ಪಡೆಯುತ್ತದಾದರೂ ಇದು ಈ ಕ್ಷೇತ್ರಕ್ಕೆ ಸೀಮಿತವಾಗಿಲ್ಲ.

ಮುಂದೆ.......



No comments: