ಸುಬ್ಬಣ್ಣ

ಕೆಲವು ವಾರಗಳ ಹಿಂದೆ ಶೇಖರ್ ಪೂರ್ಣ ನನ್ನನ್ನು ಸಂಪರ್ಕಿಸಿ ಕೆ.ವಿ.ಸುಬ್ಬಣ್ಣನವರ ಬಗ್ಗೆ ಕನ್ನಡ ಸಾಹಿತ್ಯ.ಕಾಂ ಗಾಗ ಿಒಂದು ಲೇಖನವನ್ನು ಬರೆದುಕೊಡಲು ಹೇಳಿದರು. ಆದರೆ ಇದ್ದಕ್ಕಿದ್ದ ಹಾಗೆ ಸುಬ್ಬಣ್ಣನವರ ಬಗ್ಗೆ ನನ್ನನ್ನು ಯಾಕೆ ಬರಯಲು ಕೇಳಿದರೆಂದು ಆಗ ನನಗೆ ಅರ್ಥವಾಗಲಿಲ್ಲ. ಅಹಮದಾಬಾದಿನಲ್ಲಿ ಕೂತಿದ್ದ ನನಗೆ ಸುಬ್ಬಣ್ಣನವರು ತೀರಿಕೊಂಡದ್ದು ತಿಳಿದೇ ಇರಲಿಲ್ಲ. ಹಿಂದಿನ ನನ್ನ ಬರಹದಲ್ಲಿ ನಾನು ಹೇಳಿದ್ದಂತೆ, ಕರ್ನಾಟಕದಿಂದ ದೂರವಾಗಿ ಒಂಟಿಯಾಗಿ ಇರುವುದರ ಫಲಿತವೆಂದರ ಇಂಥಹ ಸುದ್ದಿಗಳು ನಮಗೆ ಒಮ್ಮೊಮ್ಮೆ ತಡವಾಗಿ ತಲುಪುತ್ತದೆ. 



7 comments:

Anonymous said...

Dear sir,

I have gone through your views on Subbanna. It gave a picture of the spirit behind the activities of Ninasam and also the asthetics he always backed.

I felt very happy to read you and please continue to talk to us. I shall thank Jayanth as well as you for making this space meaningfull and live.

With warm regards
Narendra
narendra.pai@manipal.edu
narendrapai2003@yahoo.co.in

Anonymous said...

Dear Sriram
You have made important points about Subbanna and written in an inimitable style. Very good.
Tirumalesh

Anonymous said...

ಶ್ರೀರಾಂ,
ಸುಬ್ಬಣ್ಣನವರ ಬಗೆಗಿನ ಲೇಖನ ಮತ್ತು ಮತ್ತಷ್ಟು ಹೆಗ್ಗೋಡು, ಅಕ್ಷರ ಪ್ರಕಾಶನ, ರಂಗಶಿಬಿರಗಳ ಪ್ರಯತ್ನ ಇಂದು ಕನ್ನಡದ ವಾತಾವರಣಕ್ಕೆ ಹೆಚ್ಚೆಚ್ಚು ಅಗತ್ಯವೆನ್ನುವ ನಿಮ್ಮ ಧ್ವನಿಯಲ್ಲಿನ ಕಾಳಜಿಯಲ್ಲಿ ನನ್ನನ್ನೂ ಸಹ ಸೇರಿಸಿಕೊಳ್ಳಬಹುದು. ಸುಬ್ಬಣ್ಣನವರ ಪ್ರಯತ್ನಗಳು ತೀರಾ ವೈಯಕ್ತಿಕ ಸಾಧನೆಯಾಗದೇ ಅದು ಒಂದು ಸಾಂಶ್ಕೃತಿಕ ಸಾಧನೆಯಾಗಿರುವುದನ್ನು ಗುರುತಿಸಿದ್ದೀರ. ಉತ್ತಮವನ್ನು ದಕ್ಕಿಸ್ಕೊಳ್ಳುವ ಪ್ರಯತ್ನದಲ್ಲಿ ಯಾರೊಬ್ಬರೂ ಸಹ ಆ ಸಾಂಸ್ಕೃತಿಕ ಸಾಧನೆಯ ಪ್ರಭಾವದಿಂದ ದೂರ ಉಳಿಯಲಾರರು-ಅದು ಅನಿವಾರ್ಯ ಸಹ.

ಮತ್ತೊಂದು ಮಾತು. ನಿಮ್ಮ ಬ್ಲಾಗನ್ನು ನನಗೆ ಅರ್ಪಿಸಿದ್ದೀರಿ. ಕೊಂಚ ಮುಜುಗರ ಬೆರೆತ ಸಂತೋಷ. ನಿಮ್ಮಂತಹವರು ನನ್ನ ಪ್ರಯತ್ನವನ್ನು ಮೆಚ್ಚಿಕೊಳ್ಳುವುದು ಹೆಚ್ಚು ಉತ್ತೇಜನ ಸಿಕ್ಕಂತೆಯೆ. ಧನ್ಯವಾದಗಳು.
ಶೇಖರ್‌ಪೂರ್ಣ

Anonymous said...

ಪ್ರಿಯ ಶ್ರೀರಾಮ್,
ಈ ಪ್ರಯತ್ನ ಚೆನ್ನಾಗಿದೆ. ಸುಬ್ಬಣ್ಣನವರ ಮೇಲಿನ ಲೇಖನವೂ ಇಷ್ಟವಾಯಿತು. ಒಬ್ಬ ವ್ಯಕ್ತಿ ತುಂಬ ಆತ್ಮೀಯನಾಗಿದ್ದಾಗ ಆತನ ಬಗ್ಗೆ ಕೊಂಚ ಉಡಾಫೆಯಿಂದಲೇ ಬರೆಯುತ್ತೇವೆ. ವೈಯಕ್ತಿಕವಾಗಿ ಭೇಟಿಯಾಗದೇ, ಸಾಂಸ್ಕೃತಿಕವಾಗಿ ಸಾಹಿತ್ಯಕವಾಗಿ ಪ್ರಭಾವ ಬೀರಿದವರ ಮೇಲಷ್ಟೇ ತುಂಬ ನಿಸ್ಪೃಹವಾಗಿ ಬರೆಯಲು ಸಾಧ್ಯ ಅನ್ನೋದಕ್ಕೆ ನಿಮ್ಮ ಬರಹ ಸಾಕ್ಷಿ.
ಥ್ಯಾಂಕ್ಸ್.

Anonymous said...

there is not a single soul in kannada cultural space today which is untouched or unnurtured by subbanna in one way or the other. but 'writer' subbanna kept such a low modest profile that evan our best minds in last two decades just didnt take his vast range of writings seriously.his entire work is available now in one volume-are shatamanada ale barahagalu- and here is an opprtunity for all those who missed him as a thinker and writer to catch up with his mind.

Saamaanya Jeevi said...

ಶ್ರೀರಾಮರೆ,

ಜಯಂತರು ಬಹುಮುಖ್ಯವಾದ ವಿಚಾರವನ್ನು ಮುಂದಿಟ್ಟಿದ್ದಾರೆ.

ಸುಬ್ಬಣ್ಣನವರು ತೀರಿಹೋಗುವ ಸಮಯಕ್ಕೆ ಕಣ್ಣುಬಿಡುತ್ತಿರುವ ನನ್ನಂಥವರಿಗೇ ಕನ್ನಡ ಸಾಂಸ್ಕೃತಿಕ ಪ್ರಪಂಚವನ್ನು ಒಂದು ಮಟ್ಟದ ವಿಸ್ತಾರದಲ್ಲಿ ಬಗೆಯುವ ಅವಕಾಶ ಸಿಕ್ಕರೆ, ಎಷ್ಟೊಂದು ವ್ಯಕ್ತಿ-ವಸ್ತು-ವಿಷಯ-ಪ್ರಕ್ರಿಯೆಗಳ ವಿಚಾರದಲ್ಲಿ ಸುಬ್ಬಣ್ಣನವರ ಪ್ರಭಾವಿರುವುದು ಕಂಡು ಬರುತ್ತದೆ.

ಇಷ್ಟಾದರೂ, ಸುಬ್ಬಣ್ಣನವರನ್ನು ವ್ಯಕ್ತಿಯಾಗಿ, ಸಾಂಸ್ಕೃತಿಕವಾಗಿ ವಿಶಿಷ್ಟರಾಗಿ ಅಥವಾ ಬರಹಗಾರರಾಗಿ ಕನ್ನಡ ಪ್ರಪಂಚ ಅಷ್ಟಾಗಿ ಬಹುವಾಗಿ ಉಲ್ಲೇಖಿಸದಿರುವುದು ಒಂದು ವಿಧದಲ್ಲಿ ಆಶ್ಚರ್ಯಕರವಾದ ವಿಷಯ. ಈಗ ಉದಾಹರಣೆಗೆ, ಲಂಕೇಶ್, ಅನಂತಮೂರ್ತಿ, ಕಾರ್ನಾಡ್ ಯಾವತ್ತಿಗೂ ಒಂದಲ್ಲ ಒಂದು ಕಾರಣದಿಂದ ಎಲ್ಲದರ ಮಧ್ಯದಲ್ಲೇ ಇದ್ದವರಾಗಿ ಕಾಣುತ್ತಾರೆ. ಕೆ.ವಿ.ಎಸ್. ಹಾಗೆ ಕಾಣುವುದಿಲ್ಲ.

ಒಂದು ಕಾರಣವನ್ನು ಜಯಂತರೇ ಬರೆದಿದ್ದಾರೆ. ಅವರ low profile ವ್ಯಕ್ತಿತ್ವ. ಎರಡನೇಯದ್ದನ್ನೂ, ಅವರೇ ಸೂಚಿಸಿದ್ದಾರೆ, ಅವರ ಎಲ್ಲಾ ಲೇಖನಗಳೂ ಒಟ್ಟಿಗೆ ಸಿಗುತ್ತಿರಲಿಲ್ಲ. 'ಕವಿರಾಜಮಾರ್ಗ....' ನಂತರದ ಕಾಲದಲ್ಲೇ ಹಾಗೆ ಸಿಗುವುದಕ್ಕೆ ಮೊದಲಾದ್ದು.

ಈ ವಿಷಯದಲ್ಲಿ ಹೆಚ್ಚಾಗಿ ಬರೆಯುವುದಕ್ಕೆ ನನಗೇನೇನೂ ಅಧಿಕಾರವಿಲ್ಲದಿದ್ದರೂ, ನನ್ನ ಗಮನಕ್ಕೆ ಬಂದ ಕೆಲ perception ಗಳನ್ನಷ್ಟೇ ಇಲ್ಲಿ ದಾಖಲಿಸುತ್ತಿದ್ದೇನೆ.

೧. ಕೆ.ವಿ.ಎಸ್. ಎಚ್ಚರಿಕೆಯಿಂದ ತಾವು ಮಾಡುತ್ತಿರುವ ಯಾವುದೇ ಕೆಲಸದ ಮೂಲಕ ತಮ್ಮೆಡೆಗೆ ವ್ಯಕ್ತಿಯಾಗಿ ಅಗತ್ಯಕ್ಕಿಂತ ಹೆಚ್ಚು ಗಮನ ಹರಿಯದಂತೆ ನೋಡಿಕೊಂಡರು ಎಂದು ನನಗನ್ನಿಸುತ್ತದೆ. ಅವರ ಕೆಲ ಸಂದರ್ಶನಗಳನ್ನು ಓದಿದರೆ ಗೊತ್ತಾಗುತ್ತದೆ. ಸಮುದಾಯದ ಕುರಿತು ತಮಗಿದ್ದ ಅತೀವ ಕಾಳಜಿಯನ್ನು ಅವರು ಪೂರ್ತಿಯಾಗಿ ಜೀವಿಸಿದ್ದರೆನ್ನಿಸುತ್ತದೆ. ಹಾಗೆ ವ್ಯಕ್ತಿಯ ಕಡೆಗೆ ಹರಿಯುವ ಅತಿಯಾದ ಗಮನದಿಂದ ಬರುವ ಅಪಾಯಗಳನ್ನು ಅವರು ತೀರಾ ಗಂಭೀರವಾಗಿ ತೆಗೆದುಕೊಂಡಿದ್ದರೆನ್ನಿಸುತ್ತೆ.

೨. ಅವರ ಒಂದು ಲೇಖನದಿಂದಾಗಲೀ, ಒಂದು ಕೆಲಸದಿಂದಗಲೀ ಅವರ ಅಪೂರ್ವ ಪ್ರತಿಭೆ ಗಮನಕ್ಕೆ ಬರುವುದು ಕಷ್ಟ. ಆದರೆ ಅವರ ಒಟ್ಟಾರೆಯಾದ ಕೆಲಸಗಳನ್ನು ಗಮನಕ್ಕೆ ತಂದುಕೊಂಡು ಅದರ ಕುರಿತು ಆಳವಾಗಿ ಗಮನಿಸುವುದು ಅಷ್ಟೇನೂ ಸುಲಭದ ವಿಚಾರವೂ ಅಲ್ಲ. ಅವರಷ್ಟೇ ಆಳವಾದ ಒಳಾನೋಟವುಳ್ಳವರಿಗಷ್ಟೇ ಅದು ಸಾಧ್ಯ.

ಸುಬ್ಬಣ್ಣನವರಿಗೆ ಅರ್ಪಿತವಾಗಿರುವ 'ರಂಗಧಾಮ' ಅಭಿನಂದನಾ ಗ್ರಂಥವನ್ನೊಮ್ಮೆ ಓದಿದರೆ ಈ ಕಷ್ತಗಳ ಅರಿವಾಗುತ್ತದೆ. ಅಲ್ಲಿ ತೀರಾ ವೈಯಕ್ತಿಕವಾದ ಕೆಲ ಲೇಖನಗಳು, ಅಥವಾ ಸುಬ್ಬಣ್ಣನವರ ಸಂದರ್ಶನ ಇವಷ್ಟೇ ಚೆನ್ನಾಗಿ ಮೂಡಿಬಂದಿರುವುದು. ಅವ್ಯಾವುವೂ ಒಂದು ಆಳವಾದ ಒಳನೋಟವನ್ನು ಕೊಡುವುದಿಲ್ಲ, ಸಂದರ್ಶನವನ್ನು ಬಿಟ್ಟು.

ಸುಬ್ಬಣ್ಣನವರ ಶ್ರದ್ಧಾಂಜಲಿ ಸಭೆಯಲ್ಲಿಯೂ ಸಹ ಜನರು ಸುಬ್ಬಣ್ಣನವರ ವಿಚಾರಧಾರೆಯ ಕುರಿತು ಮಾತನಾಡುವುದಕ್ಕೆ ಕಷ್ಟಪಡುತ್ತಿದ್ದ ಹಾಗಿತ್ತು ಎಂದು ನನ್ನ ಸ್ನೇಹಿತರೊಬ್ಬರು ಗಮನಿಸಿದ್ದರೆ. ಡಾ|| ಅನಂತಮೂರ್ತಿಯವರೊಬ್ಬರು ಮಾತ್ರವೇ ಅದರಲ್ಲಿ ಯಶಸ್ವಿಯಾದದ್ದು.

ಅರೆಶತಮಾನದ ಅಲೆಬರಹಗಳು ಬಂದು ಒಂದೂವರೆ ವರ್ಷವಾಗಿದೆ. ಅಶೋಕರ ಮುನ್ನುಡಿ ಬಿಟ್ಟು ಆ ಬಗ್ಗೆ ಒಂದೇ ಒಂದು ಒಳ್ಳೆಯ ಲೇಖನವನ್ನು ನಾನು ನೋಡಿಲ್ಲ. ಪ್ರಾಯಶಃ ಅದು ಸಮುದಾಯವೇ ಒಟ್ಟಾಗಿ ಚರ್ಚಿಸಬೇಕಾದ ಪುಸ್ತಕ. ಕೊಣೆಯಲ್ಲಿ ಕುಳಿತು ಒಬ್ಬ ವಿಮರ್ಶಕ ಅದರ ಕುರಿತು ಬರೆಯುವುದು ಕಷ್ಟವೇನೋ.

ಇದೂ ಕೂಡಾ ಸುಬ್ಬಣ್ಣನವರು ಬದುಕಿದ್ದ ರೀತಿಯ ವೈಶಿಷ್ಟ್ಯವೇ ಎಂದು ಅಚ್ಚರಿ ವ್ಯಕ್ತಪಡಿಸುವುದಕ್ಕೆ ಮನಸ್ಸಾಗುತ್ತಿದೆ.

ಇವೆಲ್ಲಾ ನನ್ನ ದೂರದ ಗ್ರಹಿಕೆಗಳು, ತಪ್ಪಾಗಿರಲು ಸಾಧ್ಯ ಎನ್ನುವ ಎಚ್ಚರವಿದೆ.

-ಶಿವು

Anonymous said...

Mahashayare,
Subbannavara bagge ishtu samagravagi adare samkshiptavagi bareda innondu nskhanvannu naanu odida nenapilla. Ninasamna karya chatuvatikegala bagge kooda uttama mahiti ide. Idakkagi nanna hridayapoorvakavada abhinandanegalu.
L.Subramanya
subramanyaelles@hotmail.com